Monday, March 26, 2018

ಸಿ. ಐ. ಡಿ. ರಂಗಿ! - C.I.D. Rangi

ಸಿ. ಐ. ಡಿ. ರಂಗಿ!
ಅದ್ವಿಕಾಳಿಗೆ ಖುಷಿಯೋ ಖುಷಿ! ಮಾಯಾ ಅವಳ ಮನೆಗೆ ಸ್ಲೀಪ್ ಓವರ್ಗೆ ಬಂದಿದ್ದಳು!
ತಟ್ಟೆಯ  ತುಂಬ ಗೋಬಿ ಮಂಚೂರಿಯನ್ ತಂದಿಟ್ಟ ಅಮ್ಮ, "ಮಾಯಾ! ಇವತ್ತು ತಿಂಡಿಗೆ ಅದ್ವಿಕಾಳ ಫೇವರಿಟ್ ಗೋಬಿ ಮಂಚೂರಿಯನ್! ನಿನಗೂ ಇಷ್ಟಾತಾನೆ?"ಎಂದು ಕೇಳಿದಳು. 
"ಥ್ಯಾಂಕ್ಸ್ ಆಂಟಿ! ನನ್ಗೂ ಬಹಳ ಇಷ್ಟ!" ಎಂದಳು ಮಾಯಾ. ಕಿರುನಗೆ ಬೀರಿ ಒಳಕ್ಕೆ ನಡೆದಳು ಅಮ್ಮ. 
ಇಬ್ಬರು ಸ್ನೇಹಿತಿಯರೂ ತಿನ್ನತೊಡಗಿದಾಗ ಪಂಜರದಲ್ಲಿದ್ದ ಗಿಳಿ 'ಕೀ ಕೀ' ಎಂದಿತು.


''ಒಹೋ! ನಿನಗೂ ಮಂಚೂರಿ ಬೇಕಾ?" ಎನ್ನುತ್ತಾ ಅದ್ವಿಕಾ ತಟ್ಟೆಯಿಂದ ಒಂದು ಚೂರನ್ನು ತೆಗೆದು ಅದರ ಮೂತಿಗೆ ಹಿಡಿದಳು. ಗಿಳಿ ಅದನ್ನು ತನ್ನ ಬಾಗಿದ ಕೆಂಪು ಕೊಕ್ಕಿನಿಂದ ತೆಗೆದುಕೊಂಡು, ಒಂದು ಕಾಲಿನಿಂದ ಹಿಡಿದುಕೊಂಡು ಕುಕ್ಕಿ  ಕುಕ್ಕಿ ಸವಿಯ  ತೊಡಗಿತು.
''ಹೇಯ್! ನಿನ್ನ ಗಿಳಿ ನಿಜವಾಗ್ಲೂ ಮಂಚೂರಿ ತಿನ್ನತ್ತಲ್ಲೇ?" ಮಾಯಾಳಿಗೆ ಆಶ್ಚರ್ಯ.
"ನಾನು ಏನು ತಿಂದರೂ ಅದಕ್ಕೂ  ಒಂದು  ಷೇರ್ ಕೊಟ್ಟೇ ಕೊಡ್ಬೇಕು. ಇಲ್ದಿದ್ರೆ ಕಿರುಚಿ ರಂಪ ಮಾಡ್ಬಿಡತ್ತೆ!" ಎಂದು ನಕ್ಕಳು ಅದ್ವಿಕಾ.
ಗಿಳಿ ಮಂಚೂರಿ ತಿಂದು ಮುಗಿಸಿ ಮತ್ತೇ 'ಕೀ ಕೀ' ಎಂದಿತು.
ಪಕ್ಷಿ ಪ್ರಾಣಿಗಳ ಬಗ್ಗೆ ಅದ್ವಿಕಾಳಿಗೆ ಅತ್ಯಂತ ಸಹಾನುಬೂತಿ. ಅವುಗಳ ಸ್ವಾತಂತ್ರ್ಯದ ವಿಷಯವಾಗಿ ಅವಳು ಬರೆದ ಎಸ್ಸೇ ಸ್ಕೂಲಲ್ಲಿ ಅದೆಷ್ಟು ಪ್ರಶಂಸೆ  ಗಳಿಸಿತ್ತು! ಅದಕ್ಕೆ ಚಿನ್ನದ ಸ್ಟಾರ್ ಅಂಟಿಸಿ  ನೋಟಿಸ್ ಬೋರ್ಡಿಗೂ ಹಾಕಿದ್ದರು  ಮಂಜು ಮ್ಯಾಡಮ್.  ಅಂತಹವಳ ಮನೆಯಲ್ಲಿ  'ಪಂಜರದ ಗಿಳಿಯೇ?' ಎಂದು ಆಶ್ಚರ್ಯಗೊಂಡಳು ಮಾಯಾ!
"ಆದ್ವಿ! ತಪ್ಪು ತಿಳ್ಕೋಬೇಡ! ನಿಮ್ಮ ಮನೇಲಿ  ಪಂಜರದಲ್ಲಿ ಗಿಳಿಯನ್ನ ಇಟ್ಟಿರೋದನ್ನ ನನ್ನಿಂದ ನಂಬಕ್ಕೇ ಆಗ್ತಿಲ್ಲ!"
"ಅದರ ಬಲ ಬಾಗದ ಪುಕ್ಕ ಮುರಿದು ಹೋಗಿದೆ ಮಾಯಾ! ಅದಕ್ಕೆ  ಹಾರಕ್ಕೆ ಆಗಲ್ಲ! ಹೊರಕ್ಕೆ ಬಿಟ್ರೆ ಬೆಕ್ಕು ಇಲ್ಲವೇ ಗಿಡುಗನಿಗೆ ಬಲಿಯಾಗ  ಬೇಕಾಗತ್ತೆ. ಅದರ ರಕ್ಷಣೆಗಾಗಿಯೇ  ಪಂಜರದಲ್ಲಿ ಇಟ್ಟಿದ್ದೀವಿ." ಅದ್ವಿಕಾ ವ್ಯಸನದಿಂದ ನುಡಿದಳು.
"ಅಯ್ಯೋ! ಅದರ  ಪುಕ್ಕ ಹೇಗೆ ಮುರೀತು?"
"ಒಂದು ದಿನ ನಾನು ತೋಟದಲ್ಲಿ ಉಯ್ಯಾಲೆ ಆಡ್ತಿದ್ದೆ. ಇದು ಎಲ್ಲಿಂದ ಬಂತೋ ಏನೋ? ಪಾಪ ಹಾರಲಾರದೆ ಅಲ್ಲಿ ಕೂತು, ಇಲ್ಲಿ ಕೂತು ಕೊನೆಗೆ ನೆಲದ ಮೇಲೆ 'ದಬಕ್' ಅಂತ ಬಿತ್ತು. ನಾನು ಓಡಿ ಹೋಗಿ ನೋಡ್ದಾಗ  ಅದಕ್ಕೆ ಘಾಯವಾಗಿದ್ದು ತಿಳೀತು. ಅಪ್ಪ ಡಾಕ್ಟರನ್ನ ಕರೆಸಿ ಚಿಕಿತ್ಸೆ ಕೊಡಿಸಿದ್ರು. ಮಾಂಜಾ ಹಚ್ಚಿದ ಗಾಳಿಪಠದ ದಾರದಲ್ಲಿ ಸಿಕ್ಕಿಕೊಂಡು ಹೀಗಾಗಿದೆ  ಅಂದ್ರು ಡಾಕ್ಟರ್."
"ಅಯ್ಯೋ ಪಾಪ! ಆದ್ರೆ ಗಾಜಿನ ಪುಡಿ ಹಚ್ಚಿದ ಮಾಂಜಾ ದಾರಕ್ಕೆ ತಡೆಯಾಜ್ಞೆ  ಹಾಕಿದ್ದಾರಲ್ಲಾ!?"
"ರೂಲ್ಸ್ ಪ್ರಕಾರ ಎಲ್ರೂ ನಡ್ಕೊಳ್ಳೋದಿಲ್ವಲ್ಲ!" ಬೇಸರದಿಂದ ನುಡಿದಳು ಅದ್ವಿಕಾ.
ಅದ್ವಿಕಾಳ ಮನೆಯ ತೋಟ ಬಹಳ ದೊಡ್ಡದಾಗಿತ್ತು. ಸಣ್ಣ ಪುಟ್ಟ ಪಕ್ಷಿಗಳೂ ಬಣ್ಣದ ಚಿಟ್ಟೆಗಳೂ ಹಾರಾಡುತ್ತಿದ್ದವು.  ಹೂಗಿಡಗಳಿಂದ  ಕೂಡಿದ ಆ ತೋಟದಲ್ಲಿ ಮಾತು ಕಥೆಯಾಡುತ್ತ ಇಬ್ಬರೂ ನಡೆದಾಡಿದರು.
ತೋಟದ ಮೂಲೆಯಲ್ಲಿ ಮರದ ಚೌಕಟ್ಟುಗಳನ್ನೂ ಜಾಲರಿಗಳನ್ನೂ ಹರಡಿಕೊಂಡು ಕೆಲಸ ಮಾಡುತ್ತಿದ್ದ ಕಾರ್ಪೆನ್ಟರ್ ಶಿವಾ. ಜೊತೆಗೆ ಒಬ್ಬ ಹುಡುಗ ಸಹಾಯ ಮಾಡುತ್ತಿದ್ದ.
"ಏವಿಯರಿ ಯಾವಾಗ ರೆಡಿಯಾಗತ್ತೆ ಶಿವ?'' ಎಂದು ಕಾರ್ಪೆನ್ಟರನ್ನು
ವಿಚಾರಿಸಿದಳು ಅದ್ವಿಕಾ.

" ಆಯಿತು ಪುಟ್ ಮ್ಯಾಡಮ್! ಇವತ್ತು ಜಾಲರಿಗೆ  ಫ್ರೇಮ್ ಫಿಕ್ಸ್ ಮಾಡಿಬಿಟ್ರೆ ಆಯಿತು. ನಾಳೆ ಎಲ್ಲ ಜೋಡಿಸ್ಬಿಡ್ತೀನಿ. ಆಮೇಲೆ ಪೇಯಿಂಟ್ ಮಾಡಿಬಿಟ್ರೆ ನಿಮ್ಮ ಗಿಳಿಗೆ ಮನೆ ರೆಡಿ." ಸುತ್ತಿಗೆಯಿಂದ ಮೊಳೆಯನ್ನು ಜಜ್ಜುತ್ತಲೇ ನಗುನಗುತ್ತ ಉತ್ತರಿಸಿದ  ಶಿವಾ.
"ಮಾಯಾ! ಕೆಲವು ಗಿಡಗಳನ್ನೂ ಆ ಸಿಂಗಪೂರ್ ಚೆರ್ರಿ ಮರವನ್ನೂ ಒಳಗೊಂಡಂತೆ ಒಂದು ದೊಡ್ಡ ಏವಿಯರಿಯನ್ನ ತಯಾರು ಮಾಡ್ತಿದ್ದಾನೆ ಶಿವಾ. ರೆಡಿಯಾದ ಕೂಡ್ಲೇ ಗಿಳಿಯನ್ನ ಇಲ್ಲಿಗೆ ಟ್ರಾನ್ಸ್ಫರ್ ಮಾಡ್ತಾರೆ ಅಪ್ಪ.  ಪುಟ್ಟ ತೋಟದಿಂದ ಕೂಡಿದ ಈ ಕಾಪಲ್ಲಿ ಯಾವ ಭಯವೂ ಇಲ್ದೆ ಗಿಳಿ ಸ್ವತಂತ್ರವಾಗಿ ಸೇಫಾಗಿರಬೋದು." ಎಂದಳು  ಅದ್ವಿಕಾ. 
ಗೇಟ್ ಬಳಿ ಮೋಟಾರ್ ಬೈಕ್ ಶಬ್ದ ಕೇಳಿಸಿತು.
"ಓ! ಇನ್ಸ್ಪೆಕ್ಟರ್ ಬಂದ್ರು! ಕಳ್ಳ ಸಿಕ್ಕಿದ ಅನ್ಸತ್ತೆ!" ಎಂದ ಅದ್ವಿಕಾ ಮಾಯಾಳನ್ನು  ಎಳೆದುಕೊಂಡು ಸರ ಸರ ಮನೆಯತ್ತ ನಡೆಯತೊಡಗಿದಳು.
"ಕಳ್ಳ? ಯಾವ ಕಳ್ಳ?" ಅದ್ವಿಕಾಳನ್ನು ಹಿಂಬಾಲಿಸುತ್ತ ಆಶ್ಚರ್ಯದಿಂದ ಪ್ರಶ್ನಿಸಿದಳು ಮಾಯಾ.
"ಅಯ್ಯೋ! ಹೇಳಕ್ಕೇ ಮರೆತೆ  ನೋಡು! ಮೊನ್ನೆ ರಾತ್ರಿ ನಮ್ಮನೆಗೆ ಕಳ್ಳ ಬಂದಿದ್ದ!"
" ಹಾ?"
''ಹೌದು ಮಾಯಾ! ರಾತ್ರಿ ಎರಡು ಗಂಟೆಯೋ ಮೂರು ಗಂಟೆಯೋ ಆಗಿತ್ತಂತೆ!  ಇದ್ದಕ್ಕಿದ್ದ ಹಾಗೆ ಗಿಳಿ ಕರ್ಕಶವಾಗಿ ಅರಚಿತಂತೆ. ವಾಚ್ ಮ್ಯಾನ್ ರಜದಲ್ಲಿದ್ದ. ಕರೆಂಟ್ ಬೇರೆ ಇಲ್ಲ!ಅಮ್ಮನಿಗೆ ಮೊದಲು  ಎಚ್ಚರವಾಗಿದೆ. ಅವಳು ಹೆದರಿ  ಅಪ್ಪನನ್ನು ಎಚ್ಚರಿಸಿದಳಂತೆ. ಅಪ್ಪಾ  ಟಾರ್ಚ್ ಹೊತ್ತಿಸಿ  ಬಾಗಿಲು ತೆರೆದು ಇಡೀ ತೋಟದಲ್ಲಿ ಕಣ್ಣಾಡಿಸಿದರಂತೆ. ಅಷ್ಟರಲ್ಲಿ ಯಾರೋ ಕಾಂಪೌಂಡ್ ಗೋಡೆ ಹಾರಿ ಓಡಿ  ಹೋದಂತೆ ಇತ್ತಂತೆ! ಕತ್ತಲಲ್ಲಿ ಏನು  ಮಾಡಕ್ಕೂ ತೋಚದೆ ಅಪ್ಪಾ ಬಾಗಿಲು ಭದ್ರಪಡಿಸಿ ಮಲಗಿದರಂತೆ. ಇದೆಲ್ಲ ನನಗೆ ಗೊತ್ತೇ ಆಗ್ಲಿಲ್ಲ! ಚೆನ್ನಾಗಿ ಗೊರಕೆ ಹೊಡೀತಿದ್ದೆ! ಬೆಳಿಗ್ಗೆದ್ದು ತಲಾಶೆ ಮಾಡಿದಾಗ ಕಾಂಪೌಂಡ್ ಮೂಲೆಯಲ್ಲಿದ್ದ ಶ್ರೀಗಂಧದ ಮರವನ್ನ ಯಾರೋ ಅರ್ಧಂಬರ್ಧ ಕಡಿದು ಹಾಕಿದ್ದದ್ದು ಕಂಡುಬಂತು. ಗಿಳಿ ಕೂಗಿ ಗಲಾಟೆ ಮಾಡಿದ ಕಾರಣ ಕಳ್ಳ ಮುಂದುವರೀದೆ ಎಲ್ಲವನ್ನೂ ಹಾಗೇ ಬಿಟ್ಟು ಓಡಿಹೋಗಿದ್ದ!"
ಅದ್ವಿಕಾ ಸ್ವಾರಸ್ಯಕರವಾಗಿ ಹೇಳಿದ ವಿಷಯ ಕೇಳಿ ಮಾಯಾಳಿಗೆ ಮೈ ಝಂ ಎಂದಿತು.
ಹಜಾರದಲ್ಲಿ ಇನ್ಸ್ಪೆಕ್ಟರ್ ಅಪ್ಪನ ಜೊತೆ ಮಾತನಾಡುತ್ತಿದ್ದರು.
"ವಾಸು ಅವರೇ! ಎಲ್ಲ ಕೋನದಿಂದಲೂ ಪರಿಶೀಲನೆ ಮಾಡಿಯಾಗಿದೆ. ಕಡೆಯದಾಗಿ  ಒಂದೇ ಒಂದು ಬಾರಿ ನಿಮ್ಮ ಮನೆಯಲ್ಲಿ ಕೆಲಸ ಮಾಡೋರನ್ನೆಲ್ಲ ಮತ್ತೊಮ್ಮೆ ವಿಚಾರಿಸಿಬಿಟ್ರೆ  ಒಂದು ನಿರ್ಧಾರ ತಗೋಬೋದು." ಎಂದರು  ಇನ್ಸ್ಪೆಕ್ಟರ್.
"ಎಲ್ಲರೂ ನಂಬಿಕಸ್ತರೇ! ಆದರೆ ನನಗೇನೂ ಆಕ್ಷೇಪಣೆ ಇಲ್ಲ ಸಾರ್. ನಿಮ್ ಡ್ಯೂಟಿ ನೀವು ಮಾಡಿ." ಎಂದರು ಅಪ್ಪ. 
ಅದ್ವಿಕಾ ಮತ್ತು ಮಾಯಾ ಪೋರ್ಟಿಕೋ  ಕಂಬದ ಮರೆಯಲ್ಲಿ ನಿಂತು ಕುತೂಹಲದಿಂದ ವಿಚಾರಣೆಯನ್ನು ಗಮನಿಸ ತೊಡಗಿದರು.
ತೋಟ ಮಾಡುತ್ತಿದ್ದ ಮಾಲಿ, ಡ್ರೈವರ್ ಮತ್ತು  ವಾಚ್ ಮ್ಯಾನ್ ಎಲ್ಲರನ್ನೂ ವಿಚಾರಿಸಿ ಕಡೆಗೆ ಕಾರ್ಪೆನ್ಟರ್ ಶಿವಾನನ್ನ ಕರೆಸಿದರು ಇನ್ಸ್ಪೆಕ್ಟರ್.
"ಶಿವಾ! ಎಷ್ಟು ದಿವಸಗಳಿಂದ ಇಲ್ಲಿ ಮರಗೆಲಸ ನಡೀತಿದೆ?"
"ಹೋದ್ವಾರ ಬಂದು ಅಳತೆ ತಗೊಂಡು ಹೋದೆ ಸಾರ್. ಸಾಮಾನು ತಂದು ಎರಡು ದಿವಸಗಳಿಂದ  ಕೆಲಸ ಮಾಡ್ತಿದ್ದೀನಿ ಸಾರ್. ಬಿಲ್ಲು ಬೇಕಾದ್ರೂ ತೋರಿಸ್ತೀನಿ ಸಾರ್! ಏ ನಂದು! ಸಾಮಾನು ತಂದ ಬಿಲ್ಲು ಅಲ್ಲೇ ನನ್ನ ಚೀಲದಲ್ಲಿದೆ! ತಗೊಂಡು ಬಾರೋ." ನಡುಗುತ್ತ ಉತ್ತರಿಸಿದ ಶಿವಾ. ನಂದು ಬಿಲ್ಲುಗಳನ್ನು ತಂದು ಕೊಟ್ಟ.
"ನೋಡಿ ಸಾರ್! ಬಿಲ್ಲು!" ಅವರುಗಳ ಮಾತು ಕೇಳಿಸಲಾರದಷ್ಟು ಜೋರಾಗಿ ಕರ್ಕಶ ದನಿಯಲ್ಲಿ  ಕೂಗಾಡಿತು ಪಂಜರದಲ್ಲಿದ್ದ ಗಿಳಿ.
"ಅದ್ವಿಕಾ! ಇದು ಮಾತಾಡಕ್ಕೆ ಬಿಡ್ತಿಲ್ಲ ನೋಡು! ಒಳಗೆ ಕರಕೊಂಡು  ಹೋಗು." ಎಂದರು ಅಪ್ಪ.
ಕಂಬದ ಮರೆಯಿಂದ ಹೊರಬಂದ ಅದ್ವಿಕಾ "ಶ್! ಯಾಕೆ ಕೂಗ್ತಿಯ? ಹಸಿವಾ?" ಎನ್ನುತ್ತಾ ಪಂಜರವನ್ನು ತೆಗೆಯಲು ಹೊರಟಳು.
"ಅದು ಇಲ್ಲೇ ಇರ್ಲಿ ಬಿಡು ಮಗು! ಏನೂ ತೊಂದ್ರೆ ಇಲ್ಲ!" ಎಂದ  ಇನ್ಸ್ಪೆಕ್ಟರ್, ಬಿಲ್ಲುಗಳನ್ನು  ಕಸಿದುಕೊಂಡು ಅದರ ಮೇಲೆ ಕಣ್ಣಾಡಿಸ ತೊಡಗಿದರು. ಗಿಳಿ ಒಡಕಲು ಪುಕ್ಕ ಬಡಿದುಕೊಂಡು ಕರ್ಕಶವಾಗಿ ಅರಚುತ್ತಲೇ ಇತ್ತು.
"ಶಿವಾ, ನಿನ್ನ ಚೀಲವನ್ನ ನೋಡಬೇಕು! ಏ ಹುಡುಗ! ಚೀಲ ತಗೊಂಡು ಬಾ ಹೋಗು!" ಇನ್ಸ್ಪೆಕ್ಟರ್ ಆಜ್ಞಾಪಿಸಿದರು. ಹುಡುಗ ಮತ್ತೆ ಓಡಿದ.
"ಅಯ್ಯೋ ಸಾರ್! ನಾನು ಏನೂ ತಪ್ಪು ಮಾಡಿಲ್ಲ ಸಾರ್! ಈ ಮನೆ ಕಟ್ಟಿಸಿದಾಗಿನಿಂದ ನಾನು ಇವರಿಗೆ ಕೆಲಸ ಮಾಡ್ತಿದ್ದೀನಿ ಸಾರ್." ನಡುಗುತ್ತ ಗೋಗರೆದ ಶಿವಾ.
ಅದ್ವಿಕಾ ಗಿಳಿಯನ್ನು ಕುರಿತು ಮೃದು ಮಾತನಾಡಲು, ಅದು ಸ್ವಲ್ಪ ಸಮಾಧಾನಗೊಂಡಂತೆ ತೋರಿತು. ಶಿವಾನ ಪರಿಸ್ಥಿತಿ ಕಂಡು ಅವಳಿಗೆ ವ್ಯಸನವಾಯಿತು. ಪಾಪ ಶಿವಾ! ತುಂಬಾ ಒಳ್ಳೆಯವನು. ತಾನು ಚಿಕ್ಕವಳಿದ್ದಾಗ ತನಗಾಗಿ ಮರದಿಂದಾದ ಒಂದು ಹಸಿರು ಬಣ್ಣದ ಜಾರು ಬಂಡೆಯನ್ನು ಮಾಡಿಕೊಟ್ಟಿದ್ದನು! ಮಾವಿನಮರದ ರೆಂಬೆಯಲ್ಲಿ ಉಯ್ಯಾಲೆಯನ್ನು ಸಹ ಕಟ್ಟಿ ಕೊಟ್ಟಿರುವನು. 'ಪುಟ್ ಮ್ಯಾಡಮ್' ಎಂದು ತನ್ನನ್ನು ಪ್ರೀತಿಯಿಂದ ಕರೆದನು. ಆತನನ್ನು ಏಕೆ ಇನ್ಸ್ಪೆಕ್ಟರ್ ಇಷ್ಟು ಗೋಳು ಹೊಯ್ದುಕೊಳ್ಳುತ್ತಿರುವರು!
"ಶಿವಾ  ತುಂಬಾ ನಿಯತ್ತಿನ ಮನುಷ್ಯ ಸಾರ್! ಸುಮಾರು ವರ್ಷಗಳಿಂದ ನನಗೆ ಪರಿಚಯ!ಪಾಪ ಅವನ ಮೇಲೆ ನನಗೆ ಯಾವ ಸಂಶಯವೂ ಇಲ್ಲ!" ಅಪ್ಪ ಶಿವಾನ ಪರವಾಗಿ ಮಾತನಾಡಿದರು.
ಗಿಳಿ ಮತ್ತೇ ಕೀರಲು ದನಿಯಲ್ಲಿ ಕಿರುಚ ತೊಡಗಿತು. ರೆಕ್ಕೆ ಬಡ ಬಡ ಬಡಿದುಕೊಂಡಿತು. ಪಂಜರದೊಳಗೇ ಚಡಪಡಿಸಿತು. 
"ಛೆ! ಇದರದ್ಯಾಕೊ ಅತಿಯಾಯಿತು! ಆದ್ವಿ! ಅಮ್ಮನನ್ನು ಕರಿ! ಮೊದಲು ಒಳಗೆ ತಗೊಂಡು ಹೋಗಲಿ! ತಿನ್ನಕ್ಕೆ ಕೊಡಬೇಕೋ ಏನೋ! ಕಳ್ಳ ಬಂದ  ರಾತ್ರಿ ಹೀಗೇ  ಕೂಗಿತ್ತು! ಆಮೇಲೆ ಎರಡು ದಿವಸಗಳಿಂದ ಇದರ ಅರಚಾಟ ಸಹಿಸಕ್ಕೇ  ಆಗ್ತಿಲ್ಲ!" ಅಪ್ಪ ಸಿಡಿಮಿಡಿಗೊಂಡರು.
"ಅದರ ಕೆಲಸ ಅದು ಅಚ್ಚುಕಟ್ಟಾಗಿ ಮಾಡಿ ಮುಗಿಸಿದೆ  ವಾಸು ಅವರೇ! ನಿಮಗೆ ಅರ್ಥವಾಗಿಲ್ಲ ಅಷ್ಟೇ! ಪಾಪ! ಅದನ್ನ  ಬಯ್ಯಬೇಡಿ!" ಎಂದರು ಇನ್ಸ್ಪೆಕ್ಟರ್.
"ಅದೇನ್ ಮಾಡ್ತು ಸಾರ್?" ಅಪ್ಪ ಆಶ್ಚರ್ಯದಿಂದ ಪ್ರಶ್ನಿಸಿದರು.
ಮರ್ಮವಾದ ನಗೆ ಬೀರುತ್ತ ಎದ್ದರು  ಇನ್ಸ್ಪೆಕ್ಟರ್. ಶಿವಾನ ಚೀಲವನ್ನು ತೆಗೆದುಕೊಂಡು ಬಂದು ನಿಂತಿದ್ದ  ಹುಡುಗನನ್ನು ಕುರಿತು  ಮುನ್ನಡೆದರು. ಅವರು ಕೊಟ್ಟ ಒಂದು ಏಟಿಗೆ ಬೆದರಿ ಕುಸಿದ ಹುಡುಗ ತನ್ನ ತಪ್ಪೊಪ್ಪಿಕೊಂಡ. ಏವಿಯರಿಗೆ ಅಳತೆ ತೆಗೆಯುವುದಕ್ಕೆ ಶಿವಾನೊಂದಿಗೆ ಬಂದಿದ್ದವ, ಅಲ್ಲೇ ಬೆಳೆದಿದ್ದ ಶ್ರೀಗಂಧದ ಮರವನ್ನು ನೋಡಿದ್ದನಂತೆ. ಅದನ್ನು ಕಡಿದು ಸಾಗಿಸುವುದಕ್ಕೆ ತೀರ್ಮಾನ ಮಾಡಿದನಂತೆ. ರಾತ್ರಿ ಆತ ಮಾಡಿದ ಪ್ರಯತ್ನ ಗಿಳಿಯ ಅರಚಾಟದಿಂದ ಸಫಲವಾಗಲಿಲ್ಲ.
"ಗಿಳಿ ಕಳ್ಳನನ್ನು ಗುರುತಿಸಿದೆ. ಆತನನ್ನು  ಎದುರಲ್ಲಿ ಕಂಡಾಗ ಅರಚಿ ಎಚ್ಚರಿಸಿತು. ಅವನು ದೂರ ಸರಿದಾಗ ಸಮಾಧಾನದಿಂದಿತ್ತು. ಅದರ ವರ್ತನೆಯನ್ನ ಗಮನಿಸಿದಾಗ ನನಗೆ ಈ ಹುಡುಗನ ಮೇಲೆ ಅನುಮಾನ ಬಂತು.  ಅದನ್ನು ಖಚಿತ ಪಡಿಸಿಕೊಳ್ಳಲೆಂದೇ ಅವನನ್ನು ಚೀಲ ತರುವ ನೆಪದಲ್ಲಿ ಮತ್ತೇ ದೂರ ಕಳಿಸಿ ಪರೀಕ್ಷಿಸಿದೆ. ಆವನು ಹೋದಮೇಲೆ  ಸುಮ್ಮನಿದ್ದ ಗಿಳಿ, ಅವನನ್ನು ಮತ್ತೆ ಕಂಡಾಗ ಅರಚ ತೊಡಗಿತು. ನನ್ನ ಅನುಮಾನ ಪರಿಹರಿಸಿತು."
"ಅಯ್ಯೋ ಪಾಪಿ! ಹೊಟ್ಟೆಗಿಲ್ಲಾಂತ ಅಂಗಲಾಚಿದ. ಪಾಪ ಅನ್ನಿಸ್ತು! ಹೋದ ವಾರತಾನೆ  ನನ್ನ  ಜೊತೆ ಕೆಲಸಕ್ಕೆ ಇಟ್ಕೊಂಡೇ! ಇದಕ್ಕೇನಾ?"  ಶಿವಾ ಕೋಪದಿಂದ ಹುಡುಗನನ್ನು ದುರುಗುಟ್ಟಿಕೊಂಡು ನೋಡಿದ.
"ಹೊಸಬರನ್ನ ಕೆಲಸಕ್ಕೆ ಸೇರಿಸಿಕೊಳ್ಳೋವಾಗ ಎಚ್ಚರಿಕೆಯಿಂದ ಇರಬೇಕು ಶಿವಾ! ತೋಟಗಳಿಗೆ  ನುಗ್ಗಿ ಶ್ರೀಗಂಧದ ಮರ ಕಳ್ಳತನ ಮಾಡೋ ಒಂದು ಗುಂಪು ಊರೆಲ್ಲ ತಿರುಗಾಡ್ತಾ ಇದೆ! ಇವನನ್ನ ವಿಚಾರಿಸಿ್ದರೆ  ಇಡೀ ಗುಂಪು ಸಿಕ್ಕಿ ಬೀಳಬೋದು! ವಾಸು ಅವರೇ! ಇದಕ್ಕಾಗಿ ನಾನು ನಿಮ್ಮ ಗಿಣಿಗೆ ಥ್ಯಾಂಕ್ಸ್ ಹೇಳಬೇಕು!" ಎಂದರು ಇನ್ಸ್ಪೆಕ್ಟರ್. 
ಅದ್ವಿಕಾ ಮತ್ತು ಮಾಯಾ ಬೆರಗಿನಿಂದ ಬಾಯಿಬಿಟ್ಟುಕೊಂಡು ಇನ್ಸ್ಪೆಕ್ಟರ್ ಅವರ ಮಾತುಗಳನ್ನು ಕೇಳುತ್ತ ನಿಂತರು. ಗಿಳಿಯ ಸಾಮರ್ಥ್ಯವನ್ನು  ಅಪ್ಪಾ, ಅಮ್ಮ ಮತ್ತು ಶಿವಾ ಎಲ್ಲರೂ ಹೊಗಳಿದರು. 
ಇನ್ಸ್ಪೆಕ್ಟರ್ ನಂದುವನ್ನು ಕರಕೊಂಡು ಸ್ಟೇಷನಿಗೆ ಹೋಗುವವರೆಗೆ ಗಿಳಿ ಕಿರುಚಾಡುತ್ತಲೇ ಇತ್ತು.
"ಆಯಿತು! ಕಳ್ಳ ಹೊರಟು ಹೋದ! ರಿಲಾಕ್ಸ್!" ಅದ್ವಿಕಾ ಗಿಳಿಯನ್ನು ಪ್ರೀತಿಯಿಂದ ಮುದ್ದಿಸಿದಳು.
"ನಿನ್ನ ಗಿಳಿರಂಗ ಬಹಳ ಚತುರ ಅದ್ವಿಕಾ!" ಮೆಚ್ಚುಗೆಯಿಂದ ನುಡಿದಳು ಮಾಯಾ. 
"ರಂಗ ಅಲ್ಲ ಮಾಯಾ! ರಂಗಿ ಅನ್ನು!" ಎನ್ನುತ್ತ ಹಣ್ಣಿನ ಚೂರನ್ನು ಗಿಳಿಗೆ ತಿನ್ನಿಸಿದಳು ಅದ್ವಿಕಾ.
"ಹೌದಾ? ನಿನಗೆ  ಹೇಗೆ ಗೊತ್ತು?" ಆಶ್ಚರ್ಯದಿಂದ ಹುಬ್ಬೇರಿಸಿದಳು ಮಾಯಾ.
"ರಂಗ ಆಗಿದ್ದಿದ್ದರೆ ಕುತ್ತಿಗೆಯ ಸುತ್ತ ಒಂದು ಕಪ್ಪು  ಬಣ್ಣದ ಪಟ್ಟಿ ಇರುತ್ತಿತ್ತು. ಇದಕ್ಕೆ ಆ ಕಪ್ಪು ರಿಂಗ್ ಇಲ್ಲ. ಅದಕ್ಕೆ ಇದನ್ನ ರಂಗಿ ಅಂದೆ!" ಅದ್ವಿಕಾ ವಿವರಿಸಿ ಹೇಳಿದಳು.
"ಹಾಗಾ? ನೀನು ಹೇಳಿದ ಮೇಲೆ ಸರಿ!"ಎಂದು ಒಪ್ಪಿಕೊಂಡಳು ಮಾಯಾ. 
"ಸಿ. ಐ. ಡಿ. ರಂಗಿಗೆ ಜೇ!" ಎಂದು ಅದ್ವಿಕಾ ಮಾಯಾ ಇಬ್ಬರೂ ಒಕ್ಕೊರಳಿನಲ್ಲಿ ಘೋಷಿಸಿದರು. 
ಅಪ್ಪಾ ಮತ್ತು ಒಳಗಿನಿಂದ ಬಂದ  ಅಮ್ಮ ಸಹ ನಗುತ್ತ 'ಜೇ' ಎಂದರು.
-----------------------------------------------------------------------------------------------------------------------

Friday, March 23, 2018

ನೀರು : ಜೀವಿಗಳ ಅಮೃತ! - Water : the elixir of life.

ನೀರು! ಜೀವಿಗಳ ಅಮೃತ!
 ಗಂಗಾ, ಯಮುನಾ, ಗೋದಾವರಿ, ಸರಸ್ವತಿ, ನರ್ಮದಾ, ಸಿಂಧು, ಕಾವೇರಿ.........  
'ಏನಿದು? ಅಜ್ಜಿ ತಾತ ಹೇಳುವ ಮಂತ್ರಗಳಲ್ಲಿ ಕೇಳಿಬರುವ ಹೆಸರುಗಳಂತೆ ತೋರುತ್ತವಲ್ಲ?' ಎಂದು ಯೋಚಿಸುವಿರಾ ಮಕ್ಕಳೇ? ನೀವು ತುಂಬಾ ಜಾಣರು! ಸರಿಯಾಗಿಯೇ ಊಹಿಸಿದ್ದೀರಿ!
ಇವೆಲ್ಲ ನಮ್ಮ ಭಾರತ ಪುಣ್ಯ ಭೂಮಿಯಲ್ಲಿ ಹರಿಯುವ ಮಹಾ ನದಿಗಳ ನಾಮಾಂಕಿತಗಳೇ!
ಪ್ರಕೃತಿ ಒದಗಿಸಿಕೊಟ್ಟಿರುವ ಸಂಪನ್ಮೂಲಗಳಲ್ಲಿ ಒಂದಾದ ನೀರನ್ನು ಅತ್ಯಮೂಲ್ಯವಾದ ಸಂಪತ್ತು ಎನ್ನಬಹುದು. ನೀರು ನಮ್ಮೆಲ್ಲರ ಬದುಕಿಗೆ ಅತ್ಯವಶ್ಯಕವಾದ ಒಂದು ವಸ್ತು. ನೀರಿಲ್ಲದ ಬದುಕನ್ನು ಕಲ್ಪನೆ ಮಾಡುವುದಕ್ಕೂ ಆಗುವುದಿಲ್ಲ. ಪಕ್ಷಿ, ಪ್ರಾಣಿ, ಮರ, ಗಿಡಗಳೂ ಸಹ ನೀರಿಲ್ಲದೆ ಬದುಕಲಾರವು. ಈ ಭೂಮಿಯಲ್ಲಿಯ  ಅಸಂಖ್ಯಾತ ಜೀವ ಜಂತುಗಳಿಗೆ ನೀರು ಜೀವ ಕೊಡುವ ಅಮೃತ. ನದಿಗಳು, ಬಾವಿಗಳು, ಕೆರೆಗಳು ಮತ್ತು ಕಟ್ಟೆಗಳು ತುಂಬಿತುಳುಕುತ್ತಿದ್ದರೆ  ಮಾತ್ರ ಪ್ರಾಣಿ, ಪಕ್ಷಿ ಮತ್ತು ಮನುಷ್ಯರ ಬಾಳು  ಹಸನಾಗಿರಲು ಸಾಧ್ಯ.
ಪ್ರಕೃತಿಯನ್ನೂ, ಅದು ಒದಗಿಸಿಕೊಟ್ಟಿರುವ ಸಂಪನ್ಮೂಲಗಳನ್ನೂ ದೈವವೆಂದೇ  ಗೌರವಿಸಿ ಆರಾಧಿಸುವುದು ನಮ್ಮ ದೇಶದಲ್ಲಿ ಪ್ರಾಚೀನ ಕಾಲದಿಂದಲೂ ಬಂದಿರುವ ಪದ್ಧತಿ. ದೇವರಿದ್ದ ಕಡೆ ಆರಾಧನೆ! ಆರಾಧಿಸುವ ಕಡೆ ಸ್ವಚ್ಛತೆ! ಸ್ವಚ್ಛತೆ ಇದ್ದರೆ ಆರೋಗ್ಯ! ನದಿಗಳನ್ನೂ ಜಲಮೂಲಗಳನ್ನೂ ಆರಾಧಿಸುವುದರ ಮೂಲಕ ನೀರನ್ನು ಕಣ್ಣಿನಂತೆ ಕಾಪಾಡುವುದು, ಸ್ವಚ್ಛವಾಗಿಡುವುದು ಮುಂತಾದ ಚಟುವಟಿಕೆಗಳು ತನ್ನಿಂದ ತಾನಾಗಿಯೇ ನಡೆದುಹೋಗುತ್ತವೆ. 

ಗಂಗಾ ಆರತಿ
'ನೀರು ಚೆಲ್ಲಿ ಹಾಳುಮಾಡಿದರೆ ದರಿದ್ರ ಬರುತ್ತೆ! ಹಸಿರು ಮರ ಕಡಿದರೆ ಪಾಪ ಸುತ್ಕೊಳ್ಳತ್ತೆ!     ಭೂಮಿದೇವಿ ಅದುರೋ ಹಾಗೆ ವರ್ತಿಸಿದರೆ ಭೂಕಂಪ ಬರತ್ತೆ!'  ಚಿಕ್ಕಂದಿನಲ್ಲಿ ನನ್ನ ಅಜ್ಜಿ       ಹೀಗೆಲ್ಲ ಹೇಳಿ ನನ್ನನ್ನು ಎಚ್ಚರಿಸುತ್ತಿದ್ದಳು. ಇವೆಲ್ಲ ಪರಿಸರ ಸಂರಕ್ಷಣೆಯ ಬಗ್ಗೆ ಅಜ್ಜಿ ನನಗೆ 
  ಹೇಳಿಕೊಟ್ಟ ಮೊದಲನೇ ಪಾಠವೆಂಬುದು ಇಂದು ಅರ್ಥವಾಗುತ್ತಿದೆ. 


ಅಖಂಡ ಕಾವೇರಿ 

ಮಳೆಯನ್ನುಂಟುಮಾಡಲು ಅವಶ್ಯಕವಾದ ಅಂಶಗಳಾದ ಕಾಡುಗಳ ಮತ್ತು ಬೆಟ್ಟ ಗುಡ್ಡಗಳ ವಿನಾಶದಿಂದ ಮಳೆಯ ಅಭಾವ ಉಂಟಾಗಿದೆ. ಜೀವನದಿಗಳಿಗೆ ನೀರುಣಿಸುವ ಮಳೆಯ ಕೊರತೆಯಿಂದ  ಸ್ವಚ್ಛ ನೀರಿಗೆ ಬರ ಬಂದಿದೆ. ಒಂದಾನೊಂದು ಕಾಲದಲ್ಲಿ ಜಲರಾಶಿಯಿಂದ ತುಂಬಿ ಹರಿಯುತ್ತಿದ್ದ ನದಿಗಳು ಇಂದು ಒಣಗಿಹೋಗಿ ಮರಳು ನದಿಗಳಾಗಿಬಿಟ್ಟಿವೆ. 

ಇಂದಿನ ಪರಿಸರ ಪ್ರಜ್ಞೆ ಇಲ್ಲದ ಪ್ರಗತಿಪರವಾದ ಯೋಜನೆಗಳಿಂದ ನಮ್ಮ ಸಂಪನ್ಮೂಲಗಳಿಗೆ ಅಪಾಯ ಉಂಟಾಗಿದೆ. ಅನೇಕ ಜೀವನದಿಗಳೆಲ್ಲ ಇಂದು ಜೀವ ಬತ್ತಿಹೋಗಿ ಕಸದ ಗುಂಡಿಗಳಾಗಿ, ಖಾರ್ಕಾನೆಗಳಿಂದ ಹೊರಹೊಮ್ಮುವ ಕೊಳಚೆ ನೀರು ಹರಿವ ಚರಂಡಿಗಳಾಗಿ, ಮರಳುಗಣಿಗಳಾಗಿ ಪರಿವರ್ತಿಸಿವೆ. ಉಳಿದಿರುವ ಅಲ್ಪ ಸ್ವಲ್ಪ ಜಲಮೂಲಗಳೂ ಕಲುಷಿತಗೊಂಡು ರೋಗ ರುಜಿನಗಳು ಹೆಚ್ಚಾಗಿವೆ. 
ಮಕ್ಕಳೇ! ನೀವು ನಾಳೆಯ ಪ್ರಜೆಗಳು! ನಿಮ್ಮ ಭವಿಷ್ಯಕ್ಕಾಗಿ ಪರಿಸರವನ್ನು ಸಂರಕ್ಷಿಸಿಕೊಳ್ಳಬೇಕಾದದ್ದು ನಿಮ್ಮ ಹೊಣೆ. ಮುಖ್ಯವಾಗಿ ಅತ್ಯಮೂಲ್ಯವಾದ ಸಂಪನ್ಮೂಲವಾದ  ನೀರನ್ನು ವ್ಯಯ ಮಾಡದಿರಿ. ಜಲಮೂಲಗಳನ್ನು ಶುಚಿಯಾಗಿಡಲು ಪ್ರಯತ್ನಿಸಿ. ಗಿಡ ಮರಗಳನ್ನು ಸಂರಕ್ಷಿಸಿ. ಬತ್ತಿಹೋದ ಬಾವಿಗಳನ್ನೂ ಕೆರೆಗಳನ್ನೂ ಪುನರುಜ್ಜೀವನಗೊಳಿಸಿ. ನಿಮ್ಮ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಡಿ. ನಿಮ್ಮ ಹಿರಿಯರೊಂದಿಗೆ ಚರ್ಚಿಸಿ ಅವರನ್ನೂ ಈ ಮಹತ್ಕಾರ್ಯದಲ್ಲಿ ಬಾಗಿಯಾಗಲು ಒತ್ತಾಯಿಸಿ. 
ಪ್ರಕೃತಿಯ ಕೊಡುಗೆಯಾದ ಸಂಪನ್ಮೂಲಗಳನ್ನು ಆರಾಧಿಸಿ. ಅವುಗಳನ್ನು ರಕ್ಷಿಸುವುದರ ಮೂಲಕ ನಿಮ್ಮನ್ನು ನೀವು ರಕ್ಷಿಸಿಕೊಳ್ಳಿ. 

Sunday, March 4, 2018

The Beast King and Queen - Guest post by Advika Basu

   THE BEAST KING AND QUEEN
     Story and illustrations               
     By  ADVIKA BASU (Age 7 years)


Once upon a time there was a baby prince and a baby princess. 


They had so much fun in their childhood but they became more and more selfish as they got older. 
One fine day they became a bossy king and queen. They asked for money, diamonds and rubies otherwise the people were not allowed to stay in the kingdom. 


The people became so annoyed with the king and queen. When the king and queen shouted orders they just ignored and chatted with each other. The king and queen shouted and the people shouted back. The faces of the king and queen turned red. 
The angry king and queen poured cold water on the people. The people poured cold water back at them. Immediately the king and queen got horns and beast's teeth. 


The king and queen ordered for money, diamonds and rubies. But the people demanded for money, diamonds and rubies too. 
The bodies of the greedy king and queen became green, then their hands and legs became red, and they grew long nails. They started destroying the kingdom. 
One clever little girl got a great idea to make the king and queen normal again. The little girl went to the king and queen and said "Hello!" politely. 
They shouted at her and said "Have you come only to say hello!"


The little girl gave the king and queen lots of yummy goodies. To their surprise their faces were not red anymore. The kind little girl gave them a nice leg massage. Then their nails shrunk.
The girl poured hot water on their bodies and cold water on their hands and legs. After that their skin became normal. Then the girl took them to the dentist. The dentist pulled out all the beast's teeth and then replaced them with normal teeth. 
The king and queen were so happy that their horns magically disappeared. 


After that the king and queen became very kind to their people and they even let them have an elephant ride for free.

THE END